ಯಲ್ಲಾಪುರ : ಮೇಯಲು ಬಿಟ್ಟಿದ್ದ ಹೋರಿಯೊಂದನ್ನು ದುಷ್ಕರ್ಮಿಗಳು ಕಡಿದು,ಅದರ ರುಂಡವನ್ನು ಕಾಡಿನಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿರುವ ಘಟನೆ ತಾಲೂಕಿನ ಮಂಚಿಕೇರಿಯ ವ್ಯಾಪ್ತಿಯ ಬಿಳಕಿ ಗ್ರಾಮದಲ್ಲಿ ಕಂಡು ಬಂದಿದೆ. ಬಿಳಕಿ ಗ್ರಾಮದ ಈಶ್ವರ ನಾಯ್ಕ ಎಂಬುವವರು ಚಂದ್ರಿಕಾ ನಾಯ್ಕ ಎಂಬುವವರಿಗೆ ಸೇರಿದ 2 ಆಕಳು ಹಾಗೂ 1 ಹೋರಿಯನ್ನು ಬೆಳಿಗ್ಗೆ ಮೇಯಲು ಬಿಟ್ಟು, ಸಂಜೆ ಕೊಟ್ಟಿಗೆಯನ್ನು ನೋಡಿದಾಗ ಕೇವಲ 2 ಆಕಳು ಹಿಂದಿರುಗಿರುವುದು ಕಂಡು ಬಂದಿದೆ. ಮಾರನೆ ದಿನ ಬೆಳಗ್ಗೆ ಊರಿನ ಜನರೊಂದಿಗೆ ಕಾಡಿನಲ್ಲಿ ಹುಡುಕಿದಾಗ ಹೋರಿಯ ರುಂಡ ಹಾಗೂ ದೇಹದ ಚರ್ಮದ ಭಾಗಗಳು ಕಾಡಿನಲ್ಲಿ ದೊರೆತಿದೆ.