ಹುಬ್ಬಳ್ಳಿ: ನಗರದ ದುರ್ಗದಬೈಲ್ ಮಾರುಕಟ್ಟೆಯ ಪ್ರದೇಶದಲ್ಲಿ ಬೀದಿ ವ್ಯಾಪಾರಸ್ಥರಿಗೆ ಮಹಾನಗರ ಪಾಲಿಕೆಯ ಟೆಂಡರ್ ಪಡೆದ ವೆಂಕಟೇಶ ಎಂಬಾತ ಅವಾಜ್ ಹಾಕಿದ ಘಟನೆ ನಡೆದಿದೆ. ಮಹಾನಗರ ಪಾಲಿಕೆಯ ಟೆಂಡರ್ ಪಡೆದು ಬಡ ವ್ಯಾಪಾರಿಗಳ ಮೇಲೆ ಈ ರೀತಿ ಅವಾಜ್ ಹಾಕಿ ಅಂಗಡಿ ತೆರವುಗೊಳಿಸುವುದು ಯಾವ ರೀತಿಯ ವರ್ತನೆಯಾಗಿದೆ, ಅಧಿಕಾರಿಗಳಿಲ್ಲದೇ ಗುರುತಿನ ಚೀಟಿ ಇಲ್ಲದೇ ಗುಂಡಾ ವರ್ತನೆ ತೋರಿರುವುದು ಎಷ್ಟು ಸರಿ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.