Download Now Banner

This browser does not support the video element.

ಯಲ್ಲಾಪುರ: ಕಿರವತ್ತಿಯ ಬಳಿ ಕಂಟೇನ‌ರ್ ಲಾರಿಗೆ ಬೈಕ್ ಡಿಕ್ಕಿ,ಸವಾರ ಸಾವು,ಓರ್ವ ನಿಗೆ ಗಂಭೀರ ಗಾಯ

Yellapur, Uttara Kannada | Sep 28, 2025
ಯಲ್ಲಾಪುರ : ತಾಲೂಕಿನ ಕಿರವತ್ತಿಯ ಬಳಿ ಕಂಟೇನ‌ರ್ ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ. ಘಟನೆಯಲ್ಲಿ ಬೈಕ್‌ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.ತಾಲೂಕಿನ ಬೈಲಂದೂರಿನ ಛಾಯಪ್ಪ ಸೋಮಾಪುರಕ‌ರ್ (45) ಮೃತ ದುರ್ದೈವಿ. ಬೈಕ್ ಹಿಂಬದಿ ಕುಳಿತಿದ್ದ ಪ್ರಭಾಕರ ಸೋಮಾಪುರಕ‌ರ್(40) ಗಂಭೀರವಾಗಿ ಗಾಯಗೊಂಡಿದ್ದು, ತಾಲೂಕಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಯಲ್ಲಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.
Read More News
T & CPrivacy PolicyContact Us