ಮೂಡಾ ಪ್ರಕರಣದಲ್ಲಿ ದೂರುದಾರ ಸ್ನೇಹಮಯಿ ಕೃಷ್ಣ ಅವರ ಪಿತೂರಿ, ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತಪ್ಪಿಲ್ಲ ಎನ್ನುವುದು ರಾಜ್ಯದ ಜನತೆಗೆ ತಿಳಿದಿದೆ ಎಂದು ಶಾಸಕ ಅಜಯ್ ಸಿಂಗ್ ತಿಳಿಸಿದ್ದಾರೆ. ಸೆಪ್ಟೆಂಬರ್ 5ರಂದು ಮಧ್ಯಾಹ್ನ 2 ಗಂಟೆಗೆ ಸದಾಶಿವನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಕಾನೂನಿನ ಪ್ರಕಾರ ಸೈಟ್ ತೆಗೆದುಕೊಂಡಿದ್ದರು,ಹೀಗಾಗಿ ಕ್ಲೀನ್ ಚೀಟ್ ಸಿಕ್ಕಿದೆ ಬಿಜೆಪಿಯವರಿಗೆ ಇದು ತಕ್ಕ ಪಾಠವಾಗಿದೆ ಎಂದು ತಿಳಿಸಿದರು.