Download Now Banner

This browser does not support the video element.

ಚನ್ನರಾಯಪಟ್ಟಣ: ಹಿರಿಸಾವೆಯಲ್ಲಿ ಕುಡಿದ ಅಮಲಿನಲ್ಲಿ ಚಾಕುವಿನಿಂದ ಹಿರಿದು ಪತ್ನಿಯನ್ನೇ ಕೊಂದ ಪತಿ

Channarayapatna, Hassan | Sep 11, 2025
ಕುಡಿದ ಅಮಲಿನಲ್ಲಿ ಪತಿಯೇ ಪತ್ನಿಯ ಎದೆಗೆ ಚಾಕುವಿನಿಂದ ಹಿರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕು ಹಿರಿಸಾವೆ ಗ್ರಾಮದಲ್ಲಿ ನಡೆದಿದೆ.38 ವರ್ಷದ ರೇಖಾ ಕೊಲೆಯಾದ ಗೃಹಿಣಿ ಯಾಗಿದ್ದು, 40 ವರ್ಷದ ರಘು ಪತ್ನಿಯನ್ನೇ ಕೊಲೆ ಮಾಡಿದ ಪತಿ, 18 ವರ್ಷದ ಹಿಂದೆ ಸಕಲೇಶಪುರ ತಾಲೂಕಿನ ಹಾನುಬಾಳು ಗ್ರಾಮದ ರಘು ಜೊತೆ ವಿವಾಹ ಮಾಡಿಕೊಡಲಾಗಿತ್ತು. ಪ್ರತಿನಿತ್ಯ ಕುಡಿದು ಬಂದು ಪತ್ನಿಯ ಜೊತೆ ಜಗಳವಾಡುತ್ತಿದ್ದ ರಘು ನಿನ್ನೆ ತನ್ನ ಇಬ್ಬರು ಮಕ್ಕಳು ಟ್ಯೂಷನ್ ಗೆ ತೆರಳಿದ ವೇಳೆ ಪತ್ನಿಯೊಂದಿಗೆ ಜಗಳವಾಡಿ ಚಾಕುವಿನಿಂದ ಪತ್ನಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಹಿರಿಸಾವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ
Read More News
T & CPrivacy PolicyContact Us