ಸತತ 6ನೇ ಬಾರಿ ತುಮಕೂರು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಮಾಜಿ ಸಚಿವ ಕೆ ಎನ್ ರಾಜಣ್ಣ ವೀರಾಜಮಾನರಾಗಿದ್ದಾರೆ.ಇಂದು ನಡೆದ ಅಧ್ಯಕ್ಷರ ಸ್ಥಾನದ ಚುನಾವಣೆಯಲ್ಲಿ ರಾಜಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಾಜಣ್ಣರ ಆಪ್ತ ಜಿ.ಜೆ.ರಾಜಣ್ಣ ಪಟ್ಟಕ್ಕೇರಿದ್ದಾರೆ. ಈ ವೇಳೆ ಮಾತನಾಡಿದ ಮಾಜಿ ಸಚಿವ ರಾಜಣ್ಣ, ರೈತರ ಬದುಕನ್ನು ಹಸನುಗೊಳಿಸೋದೆ ನಮ್ಮ ಉದ್ದೇಶ. ದೇಶದ ಜಿಡಿಪಿಗೆ ಹಳ್ಳಿಗಳ ರೈತರ ಕೊಡುಗೆ ಅಪಾರ, ಅವರಿಗೆ ಅನುಕೂಲ ಆಗುವ ರೀತಿಯಲ್ಲಿ ಬ್ಯಾಂಕಿನ ಯೋಜನೆ ಇರಲಿದೆ ಎಂದರು. ನಬಾರ್ಡನಿಂದ ಅಫೆಕ್ಸ್ ಬ್ಯಾಂಕಿಗೆ 5500 ಕೋಟಿ ರೂ ಬರಬೇಕಿತ್ತು. ಆದರೆ ಈ ಬಾರಿ ಕೇವಲ 2340 ಕೋಟಿಯಷ್ಟೇ ಬಂದಿದೆ. ಅದರಿಂದ ಜಿಲ್ಲಾ ಬ್ಯಾಂಕುನಗಳಿಗೆ ನಷ್ಟ ಆಗಲಿದೆ ಎಂದರು. ಸದ್ಯ ರೈತರ ಸಾಲ ಮನ್ನಾ ಮಾಡಲು ನಾನು ಒತ್ತಾಯ ಮಾಡೋದ