ದಸರಾ ಹಬ್ಬದ ಅಂಗವಾಗಿ ಶಹಬಜಾರದ ವೀರಶೈವ ಸಮಾಜದ ವತಿಯಿಂದ ಇಂದು ಸಂಪ್ರದಾಯಬದ್ಧ ಬನ್ನಿ ಮುರಿಯುವ ಕಾರ್ಯಕ್ರಮ ಭಕ್ತಿಭಾವದಿಂದ ಜರುಗಿತು. ಹಿಂದೂ ಸಂಪ್ರದಾಯದ ಪ್ರಕಾರ ನಡೆದ ಈ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರು, ಯುವಕರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಬಾಜಾ-ಬಜಂತ್ರಿಯ ಮೇಳದೊಂದಿಗೆ ಮೆರವಣಿಗೆ ನಡೆಯಿತು. ಧಾರ್ಮಿಕ ಶ್ರದ್ಧೆಯ ಜೊತೆಗೆ ಸಾಂಸ್ಕೃತಿಕ ವೈಭವವೂ ಮೆರೆದಿದ್ದ ಈ ಕಾರ್ಯಕ್ರಮದಲ್ಲಿ ಸಮಾಜದ ಏಕತೆ ಹಾಗೂ ಭಕ್ತಿಭಾವ ಪ್ರತಿಫಲಿಸಿದವು. ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಲು ಜನರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ, ಬನ್ನಿ ಮರವನ್ನು ಆರಾಧಿಸಿ ಬನ್ನಿ ಕಡಿದರು. ಗುರುವಾರ 10 ಗಂಟೆಗೆ ಈ ಕಾರ್ಯಕ್ರಮ ಜರುಗಿತು.