Download Now Banner

This browser does not support the video element.

ಸಂಡೂರು: ಪಟ್ಟಣದಲ್ಲಿ ಶ್ರೀಗಂಧ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿ ಬಂಧನ ಮೂವರು ಆರೋಪಿಗಳು ಪರಾರಿ

Sandur, Ballari | Sep 11, 2025
ಸಂಡೂರು ತಾಲೂಕಿನ ಸ್ವಾಮಿಮಲೈ ಅರಣ್ಯ ವಲಯದಡಿಎಂಬಿ ಶಾಖಾ ವ್ಯಾಪ್ತಿಯ ಬುಗುರಿಕೊಳ್ಳ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದಮರಗಳನ್ನು ಕಡಿದು, ಚಕ್ಕೆಗಳನ್ನಾಗಿ ಪರಿವರ್ತಿಸಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ತಾಲೂಕಿನ ಸುಶೀಲಾನಗರದ ನಿವಾಸಿ40ವರ್ಷದ ಮಂಜುನಾಯ್ಕ ಎಂಬ ಆರೋಪಿಯನ್ನು ಸಂಡೂರಿನ ದಕ್ಷಿಣ ಅರಣ್ಯ ವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಡಿಎಂಬಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಗುರುಸ್ವಾಮಿ ಹಾಗೂ ಭುಜಂಗನಗರ ಗಸ್ತು ಅರಣ್ಯ ಪಾಲಕ ಚಂದ್ರನಾಯ್ಕ ವಿ. ನೇತೃತ್ವದಲ್ಲಿ ಇಲಾಖೆಯ ಸಿಬ್ಬಂದಿಯೊಡನೆ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಶ್ರೀಗಂಧ ಸಾಗಿಸುತ್ತಿದ್ದ ಮಂಜು ನಾಯ್ಕನನ್ನು ವಶಕ್ಕೆ ಪಡೆದಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದ ಇನ್ನು ಮೂವರು ಪರಾರಿಯಾಗಿದ್ದಾರೆ.
Read More News
T & CPrivacy PolicyContact Us