ಬಿಬಿಎಂಪಿಯ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರ ನಿರ್ದೇಶನದಂತೆ ವಲಯ ಆಯುಕ್ತರು ಹಾಗೂ ಜಂಟಿ ಆಯುಕ್ತರ ನೇತೃತ್ವದಲ್ಲಿ ಆಗಸ್ಟ್ 22ರಂದು ಸಂಜೆ 5 ಗಂಟೆಗೆ ಮಹದೇವಪುರ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಹಾಗೂ ಪಾದಚಾರಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು. ನಾಗರೀಕರಿಗೆ ಸುರಕ್ಷಿತ ರಸ್ತೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ವಲಯ ಆಯುಕ್ತ ರಮೇಶ್ ಅವರ ನೇತೃತ್ವದಲ್ಲಿ ಹೊರಮಾವು ರಸ್ತೆ, ಕಾರ್ಮೆಲರನ್ ರಸ್ತೆ, ಕುಂದಲಹಳ್ಳಿ, ಬ್ರೂಕ್ ಫೀಲ್ಡ್ ಹಾಗೂ ಇನ್ನಿತರ ಪ್ರದೇಶಗಳಲ್ಲಿ ರಸ್ತೆ ಗುಂಡಿ ಮುಚ್ಚಲಾಯಿತು.