ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ 48 ರ ಶ್ರೇಯಾನಗರದಲ್ಲಿ ಬರುವ 9ನೇ ಮತ್ತು 10 ನೇ ಉಪ ರಸ್ತೆಗಳ ಕಾಂಕ್ರೀಟ್ ರಸ್ತೆಯ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಶಾಸಕರಾದ ಮಹೇಶ್ ಟೆಂಗಿನಕಾಯಿ ಅವರು ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ರಮೇಶ ಬೆಳಗಾವಿ, ಪ್ರಕಾಶ್ ತೋಟದ, ರವಿರಾಜ್ ಕೊಡ್ಲಿ, ಅಶೋಕ ಹಬೀಬ್, ಅಶೋಕ ಬಿರಾದಾರ, ಅಶೋಕ ಪಾಟೀಲ್, ಹೆಚ್.ಆರ್. ಪಾಟೀಲ್, ಎಸ್.ಎಫ್. ಪಾಟೀಲ್, ಸರದ ಕುಲಕರ್ಣಿ, ವೆಂಕಣಗೌಡ ಕಂಟೆಪೆಗೌಡ್ರ, ಎಂ.ಪಿ. ನಾಗರಾಜ ಹಾಗೂ ಗುರುಹಿರಿಯರು ಉಪಸ್ಥಿತರಿದ್ದರು.