Download Now Banner

This browser does not support the video element.

ಕಲಬುರಗಿ: ತೆರೆದ ಬಾವಿ ಕಾಮಗಾರಿಗಳಲ್ಲಿ ಅಕ್ರಮ? ಪಟ್ಟಣದಲ್ಲಿ ಕೇಂದ್ರ ತನಿಖಾ ತಂಡ ಪರಿಶೀಲನೆ

Kalaburagi, Kalaburagi | Aug 27, 2025
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಡೆದ ತೆರೆದ ಬಾವಿ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ತನಿಖಾ ತಂಡ ಆಳಂದ ತಾಲ್ಲೂಕಿಗೆ ಭೇಟಿ ನೀಡಿತು. ಈ ಅವ್ಯವಹಾರದ ಬಗ್ಗೆ ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಅಧಿಕೃತ ದೂರು ಸಲ್ಲಿಸಿದ್ದರಿಂದ ತನಿಖಾ ತಂಡ ಕ್ಷೇತ್ರಕ್ಕೆ ಆಗಮಿಸಿತು. ತಂಡವು ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೆತ್ತಿಕೊಂಡಿದ್ದ ಬಾವಿ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿ, ಸಂಬಂಧಿತ ದಾಖಲೆಗಳನ್ನು ಸವಿವರವಾಗಿ ಪರಿಶೀಲಿಸಿತು. ಬುಧವಾರ ಒಂದು ಗಂಟೆಗೆ ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ...
Read More News
T & CPrivacy PolicyContact Us