Download Now Banner

This browser does not support the video element.

ಬೇಲೂರು: ಆಹ್ವಾನಪತ್ರಿಕೆಯಲ್ಲಿ ತನ್ನ ಹೆಸರಿಲ್ಲ ಎಂಬ ಕಾರಣಕ್ಕೆ ಪಟ್ಟಣದಲ್ಲಿ ಬಿ .ಈ. ಓ ವಿರುದ್ಧ ಶಾಸಕ ಎಚ್ ಕೆ ಸುರೇಶ್ ಕೆಂಡಮಂಡಲ

Belur, Hassan | Sep 8, 2025
ಬೇಲೂರು: ಪಟ್ಟಣದಲ್ಲಿ ನಡೆದ ತಾಲ್ಲೂಕು ಮಟ್ಟದ 17 ವರ್ಷದೊಳಗಿನ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾ ಕೂಟದಲ್ಲಿ ಆಹ್ವಾನ ಪತ್ರಿಕೆಯಲ್ಲಿ ಹೆಸರು ಇರಲಿಲ್ಲ ಎಂಬ ಕಾರಣಕ್ಕೆ ಸ್ಥಳೀಯ ಶಾಸಕ ಎಚ್.ಕೆ. ಸುರೇಶ್ ಕೆಂಡಾ ಮಂಡಲರಾದರು.ಪಟ್ಟಣದ ತಾಲ್ಲೂಕು ಕ್ರೀಡಾಂಗ ಣದಲ್ಲಿ ಇಂದು ಆಯೋಜನೆಗೊಂಡಿದ್ದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಎಚ್.ಕೆ. ಸುರೇಶ್ ಹಾಗೂ ಬಿಇಓ ರಾಜೇಗೌಡರ ನಡುವೆ ತೀವ್ರ ವಾಗ್ವಾದ ಜರುಗಿತು.ವೇದಿಕೆಯಲ್ಲಿ ಶಾಸಕರು ಬಿಇಓ ವಿರುದ್ಧ “ರಾತ್ರಿಯೆಲ್ಲಾ ಕುಡಿದು ಫೋನ್ ಮಾಡ್ತಿಯಾ, ಶಿಕ್ಷಕರಿಗೆ ಚಿತ್ರಹಿಂಸೆ ಕೊಡ್ತಿಯಾ” ಎಂದು ಹರಿಹಾಯ್ದರು. ಇದಕ್ಕೆ ಪ್ರತಿಯಾಗಿ ಬಿಇಓ ರಾಜೇಗೌಡ “ಯಾರು ಹೇಳ್ಳೋರು ನಿಮಗೆ ಕರೀರಿ ಅವರನ್ನು” ಎಂದು ಪ್ರತಿಕ್ರಿಯಿಸಿದರು ಇದೇ ವಿಚಾರಕ್ಕೆ ತೀವ್ರ ಜಟಾಪಟಿ ನಡೆಯಿತು
Read More News
T & CPrivacy PolicyContact Us