Download Now Banner

This browser does not support the video element.

ಮೈಸೂರು: ತಾಲ್ಲೂಕಿನ ಬೋರೆ ಆನಂದೂರಿನಲ್ಲಿ ಕೌಟುಂಬಿಕ ಕಲಹ: ಅಣ್ಣನನ್ನು ಕೊಚ್ಚಿ ಕೊಂದ ತಮ್ಮ

Mysuru, Mysuru | Sep 1, 2025
ತಾಲ್ಲೂಕಿನ ಬೋರೆ ಆನಂದೂರಿನಲ್ಲಿ ಅಣ್ಣ ತಮ್ಮಂದಿರ ನಡುವೆ ಗಲಾಟೆ ನಡೆದು ಅಣ್ಣ ಮಹೇಶನನ್ನು ತಮ್ಮ ರವಿ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ. ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳಿಂದ ಅಣ್ಣ ತಮ್ಮಂದಿರ ಮಧ್ಯೆ ಕಲಹ ನಡೆಯುತ್ತಿತ್ತು. ಇಂದು ಇಬ್ಬರ ಮಧ್ಯೆ ಶುರುವಾದ‌ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ. ಇಲವಾಲ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
Read More News
T & CPrivacy PolicyContact Us