Download Now Banner

This browser does not support the video element.

ಶಿವಮೊಗ್ಗ: ನಗರದಲ್ಲಿ ಎಸ್ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ರೂಟ್ ಮಾರ್ಚ್

Shivamogga, Shimoga | Aug 24, 2025
ನಗರದಲ್ಲಿ ಪೊಲೀಸ್‌ ಇಲಾಖೆಯಿಂದ ರೂಟ್ ಮಾರ್ಚ್ ನಡೆಸಲಾಯ್ತು. ಮುಂಬರುವ ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತವಾಗಿ ಕಾನೂನು ಸುವ್ಯವಸ್ಥೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಹಾಗೂ ವಿಶೇಷ ಕಾರ್ಯಪಡೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಭಾನುವಾರ ಸಂಜೆ 6 ಗಂಟೆಗೆ ನಗರದಲ್ಲಿ ರೂಟ್ ಮಾರ್ಚ್ ನಡೆಸಿದರು. ಶಿವಮೊಗ್ಗ ನಗರದ ಕೋಟೆ ಪೊಲೀಸ್ ಕೋಟೆ ಪೊಲೀಸ್ ಠಾಣಾ ಅವರಣದಿಂದ ಪ್ರಾರಂಭಿಸಿ, ಕೋಟೆ ಆಂಜನೇಯ ಸ್ವಾಮಿ ದೇವಾಲಯ, ಮಾರಿಕಾಂಬ ದೇವಾಲಯ, ಮಹಾರಾಜ ರಸ್ತೆ, ಯಲ್ಲಪ್ಪನ ಕೇರಿ, ಲಷ್ಕರ್‌ ಮೊಹಲ್ಲಾ, ನಾಗಪ್ಪನ ಕೇರಿ, ಉರ್ದು ಬಜಾರ್ ಮೂಲಕ‌ ಗೋಪಿ ವೃತ್ತ ಮುಕ್ತಾಯವಾಯ್ತು.
Read More News
T & CPrivacy PolicyContact Us