ಯಲ್ಲಾಪುರ : ಬಸ್ ನಿಲ್ದಾಣ ಪಕ್ಕದ ಚೌಡೇಶ್ವರಿ ದೇವಸ್ಥಾನದ ಅರ್ಚಕರಾಗಿದ್ದ ಶಂಕರ ಭಟ್ಟ, ಮೂಡೇಬೈಲ್ ಅವರ ತೋಟದಲ್ಲಿ ಹಾವು ಕಚ್ಚಿದ್ದ ರಿಂದ ಮೃತ ಪಟ್ಟಿದ್ದಾರೆ.ಹಲವು ವರ್ಷಗಳಿಂದ ಚೌಡ ಶ್ವರಿ ದೇವಸ್ಥಾನದಲ್ಲಿ ಅರ್ಚಕ ರಾಗಿ ಪೂಜೆ ಮಾಡುತ್ತ ಬಂದಿದ್ದರು. ದಿವಂಗತರು, ಬಡವ,ಬಲ್ಲಿದರೆನ್ನದೆ ಎಲ್ಲರನ್ನೂ ಬಹಳ ಪ್ರೀತಿಯಿಂದ ಕಾಣುವ ಜನಾನುರಾಗಿ ವಿಶೇಷ ವ್ಯಕ್ತಿಯಾಗಿದ್ದರು. ಅವರ ಅಗಲುವಿಕೆ ನಿಜಕ್ಕೂ ದು:ಖದಾಯಕ ಸಂಗತಿ. ಎಂದು ದೇವಸ್ಥಾನ ಸಮಿತಿ ಹಾಗೂ ಭಕ್ತರು ದುಃಖ ವ್ಯಕ್ತ ಪಡಿಸಿದ್ದಾರೆ.