Download Now Banner

This browser does not support the video element.

ವಿರಾಜಪೇಟೆ: ವಿದ್ಯಾನಗರದಲ್ಲಿ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಸಿದ ಶಾಸಕ ಎ.ಎಸ್ ಪೊನ್ನಣ್ಣ

Virajpet, Kodagu | Aug 26, 2025
ವಿರಾಜಪೇಟೆ ಯ ವಿದ್ಯಾ ನಗರದ ವಾರ್ಡ್ 8 ಮತ್ತು9 ರಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆಯ ವತಿಯಿಂದ ಸುಮಾರು ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಕಾಂಕ್ರೀಟ್ ರಸ್ತೆಯನ್ನು ಟೇಪ್ ಕತ್ತರಿಸಿ ವಿರಾಜಪೇಟೆ ಶಾಸಕ ಹಾಗೂ ಮುಖ್ಯ ಮಂತ್ರಿ ಗಳ ಕಾನೂನು ಸಲಹೆ ಗಾರರಾದ ಎ ಎಸ್ ಪೊನ್ನಣ್ಣ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ವಾರ್ಡ್ ನ ಸದಸ್ಯರಾದ ಬೆನ್ನಿ ಅಗಸ್ಟೀನ್,ಮಹಮ್ಮದ್ ರಾಫಿ,ಪುರಸಭಾ ಅದ್ಯಕ್ಷ ರಾದ ಎಂ.ಕೆ.ದೇಚಮ್ಮ, ಎಸ್ ಎಚ್ ಮತೀನ್,ಡಿ.ಪಿ.ರಾಜೇಶ್. ಪುರಸಭೆ ಮುಖ್ಯಾಧಿಕಾರಿ ಪಿ.ಕೆ.ನಾಚಪ್ಪ,ಪುರಸಭೆ ನಾಮ ನಿರ್ದೇಶನ ಸದಸ್ಯರಾದ ಅತೀಪ್ ಮನ್ನ,ಸೇರಿದಂತೆ ಪುರಸಭೆ ಕಛೇರಿಯ ಸಿಬ್ಬಂದಿ ಗಳು, ಸ್ಥಳೀಯ ನಿವಾಸಿಗಳು ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
Read More News
T & CPrivacy PolicyContact Us