ಚನ್ನಪಟ್ಟಣ -- ಬೊಂಬೆನಾಡಿನಲ್ಲಿ ಗಣೇಶೋತ್ಸವ ರಂಗೇರಿದೆ, ನಗರದಲ್ಲಿ ಬುಧವಾರ ಬೈರಾಪಟ್ಟಣ ಗ್ರಾಮಸ್ಥರು ಗಣೇಶನ ಪ್ರತಿಷ್ಟಾಪನೆಗಾಗಿ ಆಳೇತ್ತರದ ಗಣೇಶ ಮೂರ್ತಿಯನ್ನು ನಾನಾ ಜಾನಪದ ಕಲಾ ತಂಡಗಳೊಂದಿಗೆ ಪಟ್ಟಣದ ಹೆದ್ದಾರಿಯಲ್ಲಿ ಮೆರವಣಿಗೆ ಮಾಡಿದರು. ಗಣೇಶ ಮೂರ್ತಿಯ ಮೆರವಣಿಗೆ ಸಾರ್ವಜನಿಕ ಗಮನಸೆಳೆಯಿತು.ಸುಮಾರು 5 ಕಿಲೋಮೀಟರ್ ವರೆಗ ಸಾಗಿದ ಗಣೇಶ ಮೆರವಣಿಗೆಯಲ್ಲಿ , ಕರಾವಳಿಯ ಚಂಡೆವಾದ್ಯ, ಡೊಳ್ಳು ಕುಣಿತ, ಕಂಸಾಳೆ, ಪೂಜಾ ಕುಣಿತ, ತಮಟೆ ಸೇರಿದಂತೆ ನಾನಾ ಕಲಾತಂಡ ಪ್ರದರ್ಶನ ಜನರ ಗಮಸೆಳೆಯಿತು.