Download Now Banner

This browser does not support the video element.

ಮಧುಗಿರಿ: ರಾಜಣ್ಣ ವಜಾ ಖಂಡಿಸಿ ಮಿಡಿಗೇಶಿ ಗ್ರಾಮಪಂಚಾಯಿತಿ ಅಧ್ಯಕ್ಷ–ಸದಸ್ಯರ ಸಮೂಹ ರಾಜಿನಾಮೆ

Madhugiri, Tumakuru | Aug 25, 2025
ಮಧುಗಿರಿ ತಾಲೂಕಿನ ಮಿಡಿಗೇಶಿ ಗ್ರಾಮಪಂಚಾಯಿತಿ ಅಧ್ಯಕ್ಷರು ಸೇರಿದಂತೆ ಒಟ್ಟು 11 ಮಂದಿ ಸದಸ್ಯರು ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿದ್ದನ್ನು ಖಂಡಿಸಿ ಸಾಮೂಹಿಕ ರಾಜಿನಾಮೆಯನ್ನು ಸೋಮವಾರ ಸಂಜೆ 4 ಗಂಟೆಯಲ್ಲಿ ಸಲ್ಲಿಸಿದ್ದಾರೆ. ಉಪವಿಭಾಗಾಧಿಕಾರಿಗಳ ಕಚೇರಿಗೆ ರಾಜಿನಾಮೆ ಪತ್ರ ನೀಡಿದ ಬಳಿಕ ಮಾಜಿ ಅಧ್ಯಕ್ಷ ಎಸ್.ಎನ್. ರಾಜು ಮಾತನಾಡಿ, “ರಾಜಣ್ಣನ ವಜಾ ಕಾಂಗ್ರೆಸ್‌ಗೆ ದೊಡ್ಡ ಅನ್ಯಾಯ. ಅವರು ಅಹಿಂದ ವರ್ಗದ ಶಕ್ತಿಶಾಲಿ ನಾಯಕರು. ಇಂತಹ ನಾಯಕರಿಗೆ ನ್ಯಾಯ ದೊರೆಯದಿದ್ದರೆ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ” ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಹಿರಿಯ ಸದಸ್ಯರಾದ ಸುರೇಶ್, ವಿಜಯಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು ರೂಪ.
Read More News
T & CPrivacy PolicyContact Us