ಹಾವೇರಿಯ ದೇವಗಿರಿ ಮತ್ತು ಸವಣೂರು ತಾಲೂಕಿನ ನಡುವೆ ಹರಿದಿರುವ ವರದಾ ನದಿಗೆ ಕಳಸೂರು ಬಳಿ ಸೇತುವೆ ಕಂ ಬ್ಯಾರೇಜ್ ಕಟ್ಟಲಾಗಿದೆ. ಬೇಸಿಗೆಕಾಲದಲ್ಲಿ ನೀರು ಸಂಗ್ರಹಿಸಲು ಕ್ರೈಸ್ಡ ಗೇಟ್ ಅಳವಡಿಸಲಾಗುತ್ತದೆ. ಈ ರೀತಿ ಹಾಕಲು ಇಟ್ಟಿರುವ ಕ್ರೈಸ್ಟ್ ಗೇಟಗಳನ್ನ ಕಳ್ಳರು ಕದ್ದೊಯ್ದಿದ್ದಾರೆ. ೮೦ ಗೇಟಗಳಲ್ಲಿ ೩೦ ಗೇಟ್ ಬಿಟ್ಟಿರುವ ಆರೋಪಿಗಳು ರೈತರಲ್ಲಿ ಆತಂಕ ಮೂಡಿಸಿದ್ದಾರೆ. ಬೇಸಿಗೆ ಕಾಲದಲ್ಲಿ ಬೆಳೆಗಳಿಗೆ ಜಾನುವಾರಗಳಿಗೆ ಕುಡಿಯಲು ಏನು ಮಾಡಬೇಕು ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ