ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬಿಡಾಡಿ ಹಂದಿ ಹಾಗೂ ಬಿಡಾಡಿ ದನ/ಕರುಗಳನ್ನು ಸಾಕುತ್ತಿರುವ ಸಾಕಾಣಿದಾರರಿಗೆ ಈ ಮೂಲಕ ಎಚ್ಚರಿಕೆ ನೀಡವುದೇನೆಂದರೆ, ಮೈಸೂರು ನಗರದ ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ಹಂದಿ ಹಾಗೂ ಬಿಡಾಡಿ ದನ/ಕರುಗಳನ್ನು ಬಿಡುವುದರಿಂದ ಸಾರ್ವಜನಿಕರ ವಾಹನ ಸಂಚಾರಕ್ಕೆ ತೊಂಬಾ ಅಡಚಣೆ ಆಗುತ್ತಿದ್ದು, ಹಲವು ಬಾರಿ ವಾಹನ ಸವಾರರು ಮಾರಣಾಂತಿಕ ಅಪಘಾತಕ್ಕೆ ಈಡಾಗಿವುರುದು ಕಂಡು ಬಂದಿರುತ್ತದೆ. ಬಿಡಾಡಿ ಹಂದಿ ಹಾಗೂ ಬಿಡಾಡಿ ದನ/ಕರುಗಳು ಕಸದ ತೊಟ್ಟಿಗಳಲ್ಲಿ ಆಹಾರ ಸೇವಿಸುವುದಕ್ಕಾಗಿ ತೊಟ್ಟಿಯಲ್ಲಿರುವ ಕಸವನ್ನೆಲ್ಲ ಚೆಲ್ಲಾಡುವುದರಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ.