ಗುಳೇದಗುಡ್ಡ: ವಚನ ಪಿತಾಮಹ ಹಳಕಟ್ಟಿ ಅವರ ವಚನ ಸಾಹಿತ್ಯ ಬದುಕಿಗೆ ಸ್ಫೂರ್ತಿ: ಪಟ್ಟಣದಲ್ಲಿ ಸಾಹಿತಿ ಮಹಾದೇವಯ್ಯ ನೀಲಕಂಠಮಠ
ವಚನ ಪಿತಾಮಹ ಡಾ. ಹಳಕಟ್ಟಿ ಅವರು ನಿರ್ಲಕ್ಷಕ್ಕೆ ಒಳಗಾಗಿದ್ದ ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡಿ ಅದನ್ನು ಗ್ರಂಥ ರೂಪಕ್ಕೆ ತಂದುಕೊಟ್ಟ ಮಹಾನ್ ಚೇತನ ಅಂತಹ ಮಹನೀಯರ ವಚನ ಸಾಹಿತ್ಯ ನಮಗೆಲ್ಲ ಸ್ಪೂರ್ತಿದಾಯಕವಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಮಹದೇವಯ್ಯ ನೀಲಕಂಠ ಹೇಳಿದರು. ಗುಳೇದಗುಡ್ಡದಲ್ಲಿ ಜರುಗಿದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಳಕಟ್ಟಿ ಅವರ ವಚನ ಸಾಹಿತ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದರು.