ಶಿರಸಿ : ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ದ್ವಿತೀಯ ಪುತ್ರಿ ಕು.ರಾಜಲಕ್ಷ್ಮಿ ಮತ್ತು ಚಿ.ಬಾಲಚಂದ್ರ ಅವರ ವಿವಾಹ ಸಮಾರಂಭ ಶಿರಸಿ ತಾಲೂಕಿನ ಕಾಗೇರಿಯ ಸ್ವಗೃಹದಲ್ಲಿ ಜರುಗಿತು. ಈ ವಿವಾಹ ಮಹೋತ್ಸವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಭಾಗವಹಿಸಿ ನೂತನ ವಧು-ವರರ ಬಾಳು ಸುಖ, ಸಂತೋಷದಿಂದ ಕೂಡಿರಲಿ ಎಂದು ಶುಭ ಕೋರಿದರು. ಈ ಸಂದರ್ಭದಲ್ಲಿ ಸಂಸದ ಕಾಗೇರಿ ದಂಪತಿಗಳು ಅವರ ಕುಟುಂಬದ ಹಿರಿಯರು,ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಪಕ್ಷದ ಪ್ರಮುಖರಾದ ಸುನೀಲ್ ಹೆಗಡೆ,ಕೆ.ಜಿ. ನಾಯಕ್, ಸುಭಾಷ್ ಪಾಟೀಲ್, ಹಿರಿಯರಾದ ಗುರುಮೂರ್ತಿ ಹಾಗೂ ಹಲವಾರು ಮುಖಂಡರು ಇದ್ದರು.