ಕಲಬುರಗಿ: ಆರ್ಎಸ್ಎಸ್ ಕುಮ್ಮಕ್ಕಿನಿಂದ ನನಗೆ ಬೆದರಿಕೆ ತಂತ್ರ: ನಗರದಲ್ಲಿ ಭೀಮ್ ಆರ್ಮಿ ಮುಖಂಡ ಸತೀಶ್ ಹುಗ್ಗಿ
ಕಲಬುರಗಿಯ ಶಹಾಬಾದ್ ರಿಂಗ್ ರಸ್ತೆ ಬಳಿ ನಿನ್ನೆ ತಡರಾತ್ರಿ ಭೀಮ್ ಆರ್ಮಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ್ ಹುಗ್ಗಿ ಅವರ ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಅಜ್ಞಾತರು ಬೆಂಕಿ ಹಚ್ಚಿ ಪರಾರಿಯಾದ ಘಟನೆ ನಡೆದಿದೆ. ಈ ಕುರಿತು ಸತೀಶ್ ಹುಗ್ಗಿ ಮಾತನಾಡಿ, ಆರ್ಎಸ್ಎಸ್ ಪಥಸಂಚಲನ ವಿರುದ್ಧ ಹೋರಾಟ ನಡೆಸಿದ ನನಗೆ ಬೆದರಿಕೆ ತಂತ್ರ ರೂಪದಲ್ಲಿ ಈ ಕೃತ್ಯ ನಡೆದಿದೆ. ಇದರಲ್ಲಿ ಆರ್ಎಸ್ಎಸ್ ಪರ ಶಕ್ತಿಗಳ ಕುಮ್ಮಕ್ಕಿದೆ ಎಂದು ಆರೋಪಿಸಿದ್ದಾರೆ. ಘಟನೆಯ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ತನಿಖೆ ಪ್ರಾರಂಭವಾಗಿದೆ ಎಂದು ಶೆನಿವಾರ 8 ಗಂಟೆಗೆ ಮಾಹಿತಿ ಲಭ್ಯವಾಗಿದೆ....