ದಾಂಡೇಲಿ: ನ.13ರಂದು ರೋಟರಿ ಸಭಾಭವನದಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ, ನಗರದಲ್ಲಿ ಸಂಘದ ಅಧ್ಯಕ್ಷ ಉತ್ಪಲ ಶಿರೋಡ್ಕರ
ದಾಂಡೇಲಿ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ದಾಂಡೇಲಿ ತಾಲೂಕು ಘಟಕದ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ನ.13 ರ ಗುರುವಾರ ಸಂಜೆ 4:30 ಗಂಟೆಗೆ ಸರಿಯಾಗಿ ನಗರದ ರೋಟರಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷ ಉತ್ಪಲ ಶಿರೋಡ್ಕರ ಅವರು ತಿಳಿಸಿದ್ದಾರೆ. ಅವರು ಇಂದು ಬುಧವಾರ ಬೆಳಗ್ಗೆ 9.00 ಗಂಟೆ ಸುಮಾರಿಗೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದರು. ಈ ಸಭೆಯಲ್ಲಿ ವೇತನ ಶ್ರೇಣಿ, ಸರಕಾರಿ ಆದೇಶಗಳ ಕುರಿತು ವಿಷಯ ಚರ್ಚೆ, ಎನ್.ಪಿ.ಎಸ್ ನಿಂದ ಓ.ಪಿ.ಎಸ್ ಕಡತದ ಸ್ಥಿತಿಗತಿ, ವಿವಿಧ ಇಲಾಖೆಯಲ್ಲಿನ ನೌಕರರ ಕುಂದುಕೊರತೆಗಳು ಮೊದಲಾದ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು.