ಹುಬ್ಬಳ್ಳಿ ನಗರ: ನಗರದಲ್ಲಿ ಅಗ್ನಿ ಅವಘಡ ಸುಟ್ಟ ಕರಕಲಾದ ಅಂಗಡಿ ಮಾಲೀಕನಿಗೆ ಧೈರ್ಯ ತುಂಬಿದ ರಜತ್ ಉಳ್ಳಾಗಡ್ಡಿಮಠ
ಹುಬ್ಬಳ್ಳಿಯ ಹೊಸೂರಿನ ಬಸ್ ನಿಲ್ದಾಣದ ಬಳಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಶಿಗ್ಗಾಂವಿ ತಾಲೂಕಿನ ಹುಲಗೂರಿನ ಮುಕ್ತುಂ ಅವರಿಗೆ ಸೇರಿದ್ದಿ ಎರಡು ಸ್ವೀಟ್ ಮಳಿಗೆಗಳು ಸಂಪೂರ್ಣ ಸುಟ್ಟು ಕರಕಲಾಗಿ ಮಳಿಗೆಗಳಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಭಸ್ಮವಾಗಿವೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಈ ದುರಂತ ಸಂಭವಿಸಿದ್ದು, ಇಂದು ಘಟನಾ ಸ್ಥಳಕ್ಕೆ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಭೇಟಿ ನೀಡಿ ಮುಕ್ತುಂ ಅವರಿಗೆ ಧೈರ್ಯ ತುಂಬಿ ತಮ್ಮ ಪ್ರತಿಷ್ಠಾನದ ಮೂಲಕ ಅಗತ್ಯ ನೆರವು ನೀಡುವ ಭರವಸೆಯನ್ನು ನೀಡಿದರು.